ಪ್ರಸಾದ್ ಸಾಮಕ
ಡಾ. ಗೀತಾ ಪಾಟೀಲ್
ಪ್ರದೀಪ್ ಅವಧಾನಿ
ಅವ್ವಾ! ಎಷ್ಟು ಚೆಂದ ನಿನ್ನೊಡನಾಟ!
ಸ್ಫೂರ್ತಿ ತರುವ ಜೀವನ ನೋಟ
ಮೋಸಗೊಳಿಸುವ ವಯಸು
ಅದನೆಣಿಸದ ಲವಲವಿಕೆಯ ಮನಸು
ಬಿಗುಮಾನ ದಾಕ್ಷಿಣ್ಯ ಅಂಜಿಕೆ
ಅವುಗಳ ಲಕ್ಷ್ಯವೇತಕೆ?
ಜೀವನೋತ್ಸಾಹಕ್ಕಿಲ್ಲ ಎಲ್ಲೆ
ಆಡಲು ಸೈ ಕುಂಟೆ ಬಿಲ್ಲೆ
ದಾವಣಿಯ ದಿನಗಳ ಮೀರಿಸುವ ಹುರುಪು
ಹೃದಯ ಕುಪ್ಪಳಿಸಲು ಸ್ಪಂದಿಸುವ ಮನಸು
ಹಿರಿಹಿಗ್ಗುವ ಸಿರಿವಾಸಂತಿ
ಸುಗ್ಗಿ ತರುವ ಕಣ್ಣಕಾಂತಿ
ಪ್ರತಿದಿನವಾಗಿದೆ ಸಂಕ್ರಾಂತಿ
ಅವ್ವಾ! ಎಷ್ಟು ಚೆಂದ ನಿನ್ನೊಡನಾಟ!
ಸ್ಫೂರ್ತಿ ತರುವ ಜೀವನ ನೋಟ
ಭಕ್ತವತ್ಸಲ ಆರ್.
ಹರೆಯದ ಹುಡುಗರು ಎಲ್ಲಾ
ನಾಚಿ ನಿಂತರೂ ನೋಡಿ,
ನರೆಯ ನೆರಿಗೆಗಳ್ಳೆಲ್ಲಾ
ನಿಮಗಾವ ಲೆಕ್ಕ ಬಿಡಿ.
ಬದುಕಿನೆಡೆಗೆ ಇರುವ,
ನಿಮ್ಮ ಈ ಒಲುಮೆ
ಹಿಮತಟದ ನದಿಯಂತೆ
ಎಂದೂ ಬತ್ತದ ಚಿಲುಮೆ!!
ದಿನವೂ ಹೊಸತನ..
ಇದ್ರೆ ಎಂದೂ..ಜೀವನ
ಅರಿತೆವು ನಾವಿಂದು, ಮನಸಿಗೆಂದಿಗೂ
ಬಾರದು ಮುದಿತನ!!
ಕ್ರಿಶ್ ಕೃಷ್ಣಮೂರ್ತಿ
ದೊಡ್ಡಮ್ಮನಾ ಚಿತ್ರ ಸ್ಪೂರ್ತಿಯ ತಂದಿತಾ
ಮಾಡುವೆನು ನಾನೂ ಕಸರತ್ತು ಖಂಡಿತಾ
ಚಡ್ಡಿ ಟೀಶರಟು ಹಾಕಿ ಓಡಿದೆನು ಪಾರ್ಕಿಗೆ
ಬಾಸ್ಕೆಟ್ ಬಾಲ್ ಆಡುವ ಗಟ್ಟಿನೆಲ ಕೋರ್ಟಿಗೆ
ತಟ್ಟುತ್ತ ಓಡುತ್ತ ಎಸೆದೆ ಆ ಬುಟ್ಟಿಯತ್ತ
ಬಾಲ್ ಹಿಂತಿರುಗಿದರೂ ಜೋರು ನನ್ ಥಕಧಿಮಿತಾ
ಹದಿನೈದು ನಿಮಿಷದಲಿ ಧಾವಿಸಿದೆ ಮನೆ ಕಡೆಗೆ
ಬೆನ್ ಸೊಂಟಕ್ಕೆ ಹಚ್ಚಲು ಜಂಡೂಬಾಂಬ ಬೆಂಗೇ



No comments:
Post a Comment