ಡಿ.ವಿ.ಗುಂಡಪ್ಪನವರ ಜನ್ಮದಿನದ ಸಂದರ್ಭ
ಕನ್ನಡದ ಸಿರಿ, ಗೀತಾಚಾರ್ಯ ತಾವೇ ಪೂಜ್ಯ ಗುರುವೇ |
ಉನ್ನತಿ, ಆತ್ಮೋದ್ಧಾರಕೆ ಕಗ್ಗದಿಂ ದಾರಿತೋರಿದಿರೆಲ್ಲರಿಗೂ |
ಘನ್ನಮಹಿಮಗೆ ಮೊದಲ್ ನಿಮ್ಮಪಾದಂಗಳಲಿಡುವೆ ಶಿರ |
ಮನ್ನಿಸೀ ಸ್ಮರಣೆ ಮುಕ್ತಕ, ಮಂದಮತಿ ನಾ - ಮಂಕುತಿಮ್ಮ||
- ಕ್ರಿಶ್ ಕೃಷ್ಣಮೂರ್ತಿ
ಪಾರ್ವತಮ್ಮ ರಾಜಕುಮಾರ್ ನಿಧನದ ಸಂದರ್ಭದಲ್ಲಿ
ಯಾರೇ ಕೂಗಾಡಲಿ
ಊರೇ ಹೋರಾಡಲಿ
ಒಂದಂತೂ ಕೇಳುವೆನಿಲ್ಲಿ
ಮುತ್ತುರಾಜನಂತಹವರೆಲ್ಲಿ
ಬೇರೆ ಭಾಷೆಗೆ ಹೋದವನಲ್ಲ
ಕೆಟ್ಟ ಭಾಷೆಯ ಬಳಸಿದವನಲ್ಲ
ಕುಡಿದು ಸೇದಿ ತಲೆ ಕೆಡಿಸಿದವನಲ್ಲ
ಒಬ್ಬಳೇ ಹೆಂಡತಿಯ ಜೊತೆಗಿದ್ದನಲ್ಲ
ಯೋಗಾಭ್ಯಾಸವ ಮಾಡಿದನಲ್ಲ
ಸಮಾಜಕೆ ದಿಕ್ಕ ತೋರಿಸಿದನಲ್ಲ
ಅಚ್ಚ ಕನ್ನಡವ ಉಚ್ಛರಿಸಿದನಲ್ಲ
ಎಡವಿದರೂ ಎದ್ದು ನಿಲ್ಲುವ ಮಕ್ಕಳ ಬೆಳಸಿದನಲ್ಲ
ಅಂತಹ ಕನ್ನಡಿಗ ಮೊದಲು ಹುಟ್ಟಲಿಲ್ಲ
ತಿಳಿದಿದೆ ಇನ್ನೊಮ್ಮೆ ಹುಟ್ಟುವುದೂ ಇಲ್ಲ
ಆ ಶಿವನ ಯಶಸ್ಸಿಗೆ ಕಾರಣವಾದಳಲ್ಲ
ಅಕ್ಷರ ಕಲಿಯದ ಆ ಧೀರೆ ಪಾರ್ವತಿ ಇನ್ನಿಲ್ಲ
- ಪ್ರಸಾದ್ ಸಾಮಕ
ಮಡದಿಯನ್ನು ಭಾರತಕ್ಕೆ ಕಳಿಸಿ ವಿರಹಿಗಳಾದವರಿಗೆ !
ಕವಿಗ್ಯಾವುದು ಸಮಯ
ಕ್ಷಣಕ್ಷಣವೂ ಕಾವ್ಯಮಯ
ಲೇಖನಿಯೂ ಬೇಡ,
ಕಾಗದದ ತುಂಡೂ ಬೇಡ
ಮನವೆಂಬ ಮಂಟಪದಲಿ
ಮಡದಿಯ ನೆನೆದಿರೆ...
ಅಲ್ಲಲ್ಲ! ತಾಳಿ ತಾಳಿ
ತಾಳಿ ಕಟ್ಟದೇ ಬಿಟ್ಟ
ಕಾಲೇಜಿನ ಸುಂದರಿ
ಈಗೆಲ್ಲಿ ನೀ ಓ ನೀಲ ನಾರಿ
ಮನೆಯಲ್ಲಿ ಮಡದಿಯಿಲ್ಲ
ಮಕ್ಕಳ ಕಾಟವಿಲ್ಲ
ಬೇಸಿಗೆ ರಜೆ ಇದೆಯಲ್ಲ
ಇಂಡಿಯಾಗೆ ಹೋಗಿಹರೆಲ್ಲ
ಒಲ್ಲೆನೆಂದರೂ ಮನದಿ
ಗಟ್ಟಿಯಾಗಿ ಕೂತಿಹಳು ಮಡದಿ
ಇಲ್ಲ ಇದು ಸಕಾಲವಲ್ಲ
ಗೆಳತಿ ನಿನ್ನ ನೆನಪುಗಳೆಲ್ಲ
ಕಸದ ಬುಟ್ಟಿಗೆ ಹಾಕದೇ
ಬೇರೇ ವಿಧಿಯೇ ಇಲ್ಲ
- ಅನಿಲ್ ಭಾರದ್ವಾಜ್
ಪರಿಸರ ದಿನಾಚರಣೆ
🌎☘
ಪ್ರಾಣವೀವ ಗಾಳಿ ಉಸಿರು
ನದಿ ಕೆರೆಗಳ ಕುಡಿವ ನೀರು
ನೀಲ ಗಗನ ಹಸಿರು ತಳಿರು
ತೂಗುವ ತೆನೆ ಹೊನ್ನ ತರು
ಪರಿಸರ ದಿನವಾಚರಿಸುವೆವಿಂದು
ಭೂಮಿ ತಾಯಿ ಪೊರೆವಳೆಂದೂ
ಅವಳನರಿತು ನಮ್ಮ ಒಳಿತು
ಇರವು ಇರದು ಇದನು ಮರೆತು 🌿🌷
- ಕ್ರಿಶ್ ಕೃಷ್ಣಮೂರ್ತಿ
ವಾಹ್ ವಾ
ಕಷ್ಟದ ಶಿರಶಾಸನವಿದು
ಸಖತ್ತಾಗಿ ಮಾಡಿರುವರು
ನಂಕೈಯಲ್ಲಂತೂ ಆಗದು
ತಲೆ ಕೆಳಗಾಗಿ ನಿಂತರೂ!
- ಕ್ರಿಶ್ ಕೃಷ್ಣಮೂರ್ತಿ
******************
ಸಮಾಜದ ನಡವಳಿಕೆ:
ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದರೇ
" ಮಗು ನೀನು ಯಾರು ಹೆತ್ತ ಪುಣ್ಯಾತ್ಮನಪ್ಪ" ಅಂತಾರೆ.
ಅದೇ ಮಗು ಪರೀಕ್ಷೆಯಲ್ಲಿ ವೈಫಲ್ಯ ಹೊಂದಿದರೇ
" ಯಾವಲೇ ಮಾಸ್ತರ ನಿನಗ ಕಲಿಸದಾವ" ಅಂತಾರೆ..
ಯಶಸ್ಸಿಗೆ ತಂದೆ ತಾಯಿ.
ವೈಫಲ್ಯಕ್ಕೆ ಬಡಪಾಯಿ ಮೇಷ್ಟ್ರು
ಕ್ರಿಶ್ :
ಪಾಪ ಏನನ್ನುತ್ತಾರೋಪ್ಪಾ
ಮಾಸ್ತರರ ಅಮ್ಮ ಅಪ್ಪ
ಗೀತಾ ಪಾಟೀಲ್:
ಅಲ್ಲಾ...
ನಾವದೀವಿ ಬಡ ಮಾಸ್ತರ....
ನಮಗ್ಯಾಕ ಹೀಂಗ ಅನ್ತಾರ...
ಕ್ರಿಶ್:
ನಮ್ಮಾಕೀ ಕೂಡಾ ಬಡ ಮಾಸ್ಟರ್ರೀ
ಮನೀಗ್ ಬಂದ್ಮೇಲ್ ಹೇಳ್ತಾಳರೀ -
'ಸ್ಕೂಲ್ ನಾಗ್ ಯಾವ್ ಮಕ್ಕಳ್ರೂ ,
ನನ್ ಮಾತ್ ನಿಮ್ ತರಾ ಕೇಳೋಲ್ರೀ!'
ಪ್ರಸಾದ್ ಸಾಮಕ:
ಒಂದೇ ದಿನದಲ್ಲಿ ಇಷ್ಟೊಂದು ಸಾಲುಗಳೇ
ಉದ್ದಿಶ್ಯವಿತ್ತು ಸ್ಮರಿಸಲು ಆಳಿದ ಆಳಿದ ಕವಿಗಳ ರಗಳೆ
ತಿಳಿದಿರಲಿಲ್ಲ ಈ ಗುಂಪು ಹುಟ್ಟಿದಾಗ ಬಂಧುಗಳೇ
ನಮ್ಮ ಸದಸ್ಯರೆಲ್ಲಾ ಸ್ವತಃ ಪ್ರತಿಭೆಯುಕ್ಕುವ ಕವಿಗಳೇ !
*****************************
ಗಂಡ ಆಫೀಸಿನಲ್ಲಿ ಕೂತಿದ್ದಾಗ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ
" *ಹಕ್ಕಿಯಂತೆ ಬಾನಂಗಳದಲ್ಲಿ ಹಾರಾಡುವ ಆಸೆ*".
ಕೆಳಗೆ ಹೆಂಡತಿ ಕಮೆಂಟ್ ಮಾಡಿದಳು
*ಭೂಮಿ ಮೇಲೆ ಕಾಲಿಟ್ಟಾಗ ಮನೆಗೆ ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಬನ್ನಿ.*
ಕ್ರಿಶ್:
ನೀ ಅಂದುಕೊಂಡಿರಬಹುದು ನೀನೊಂದು ಹಕ್ಕಿ
ಎಲ್ಲಿದ್ದರೂ ಹಿಡಿದುಕೊಂಡಿರುವಳು ಆಕಿ ನಿನ್ನ ರೆಕ್ಕಿ
ತಾಳಿ ಕಟ್ಟಿದ ಮೇಲೆ ನೀನೇನು ಮಾಡಿದರೂ ಸರಿ
ಮೊದಲವಳ ಅಪ್ಪಣೆಯ ಕೇಳಿಪಡೆವುದ ನೀನರಿ
ಪ್ರದೀಪ್:
ಚಂದಮಾಮ ಕತೆಯಲ್ಲಿ
ಮಾಂತ್ರಿಕ ತನ್ನ ಪ್ರಾಣ
ಸಪ್ತಸಾಗರದಚೆಯ ದ್ವೀಪದಲ್ಲಿ
ಗುಹೆಯಲ್ಲಿರುವ ಅರಗಿಣಿಯಲ್ಲಿ
ಅಡಗಿಸಿಡುವನಂತೆ
ಚಂದದ ಮಾನವನ ಕತೆಯಲ್ಲಿ
ಗಂಡು ಮದುವೆಯಾದಾಗ
ಸಪ್ತಪದಿಯೊಡನೆ
ಸತಿಯೆಂಬ ಅರಗಿಣಿಗೆ
ತಾಳಿ ಕಟ್ಟಿದಾಗ
ತನ್ನ ಮಂತ್ರಬಲದಿಂದ
ವರನಿಗರಿವಿಲ್ಲದಂತೆ
ಪುರುಷಶಕ್ತಿಯನ್ನು ಅದರಲ್ಲೇ
ಅಡಗಿಸಿಟ್ಟುಕೊಳ್ಳುತ್ತಾಳಂತೆ!
ಕ್ರಿಶ್:
ಚಂದಮಾಮ ತಂದ ನೆನಪು
ಆಗೆಲ್ಲ ಊರಲಿರುತಿತ್ತು ಪಬ್ಲಿಕ್ ರೀಡಿಂಗ್ ರೂಮ,
ಅಲ್ಲಿ ಬರುತಿತ್ತು ಒಂದೇ ಒಂದು ಚಂದಮಾಮ,
ಕುಳಿತೊಬ್ಬ ಓದುವನು ಹಿಂದೆ ನಿಲ್ಲುವರು ಹತ್ತಾರು ಮಕ್ಕಳು,
ಅಂವ ಪುಟ ತಿರುಗಿಸಲು ಯಾರೋ ಹೇಳುವರು ಒಂದ್ನಿಮಿಷ ತಾಳು,
ಇಂದಿಲ್ಲ ನಾಳೆ ಓದುವೆನೆಂದು ನಾ ಓಡುವೆ ಮನೆಕಡೆಗೆ,
ಸಂತಸವ ಕೊಡುವ ಆಗಸದ ಚಂದಮಾಮ ಅಲ್ಲಿವರೆಗೆ.
ಪ್ರದೀಪ್:
ಮದುವೆಯ ಮೊದಲು
ರೋಸ್ ಡೇ. ವ್ಯಾಲೆಂಟೆನ್ಸ್ ಡೇ. ಬರ್ತ್ ಡೇ.
ಪುರುಸೊತ್ತಿದ್ದಾಗೆಲ್ಲಾ ಕಾಫಿ ಡೇ
ಮದುವೆಯ ನಂತರ . ಒಂದೇ ಡೇ.
"ನನ್ನ ಪಾಡಿಗೆ ನನ್ನ ಬಿಟ್ ಬಿಡೇ......
ಕ್ರಿಶ್:
ನನ್ನನೆಂದೂ ಮರೆಯದೆ
ನೀನೇ ಎಲ್ಲ ಮುಗಿಸದೆ
ನನಗೂ ಒಂದೆರಡು ಇ ಡೇ
ಅಂಬೋ ಡೇ ಪಕೋ ಡೇ
ಗೀತಾ:
ಬಿಟ್ಟೇನೆಂದರೂ ಬಿಡದೀ ಮಾಯೆ...
ಏಳೇಳೂ ಜನ್ಮದ ನಂಟಿದು ಮಾಯೆ...
ಶೇಷ:
ಹೆಣ್ಣಿಗೆ ಇರಬಾರದು ಹಠ
ಗಂಡಿಗೆ ಇರಬಾರದು ಚಟ
ಇದನ್ನು ಅರಿತರೆ ಸಂಸಾರ ಸುಂದರ
ಇಲ್ಲದಿದ್ರೆ ಆಗುವುದು ಜೀವನ ಭಯಂಕರ
********************************
"KSA ಮೆರವಣಿಗೆ!"
ಸಹನಾ ಕೇಶವ ಕುಟುಂಬದ ಬೀಳ್ಕೊಡುಗೆ
ಸ್ವಲ್ಪ ನೆನಪಿಸುವೆ ನಾ ನಿಮಗೆ
ಇವರು ಅರಿಜೋನಾ ಕನ್ನಡಿಗರಿಗೆ ಕೊಟ್ಟ ಕೊಡುಗೆ
ನಮ್ಮ ಬೆಳ್ಳಿ ಹಬ್ಬದ ಸಿರಿ ಮೆರವಣಿಗೆ!
ಕನ್ನಡದ ಕಂಪ ಬೀರಿ ಮೊಳಗಿತು ನಮ್ಮ ಹಾಡು
"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು"
ನಾಡ ಧ್ವಜ ಸಿಂಗರಿಸಿದ ಕನ್ನಡಾಂಬೆಗೆ ನಮನ
ಗಂಡಾಗುಂಡಿಯಿಲ್ಲದ ರಾವ್ ದಂಪತಿಗಳ ಸಮ್ಮಿಲನ!
ಕುವೆಂಪು ಸರ್ ಎಂ ವಿಶ್ವೇಶ್ವರಯ್ಯ
ಟಿಪ್ಪು ಜಯಚಾಮರಾಜೇಂದ್ರ ಒಡೆಯ
ಕಿತ್ತೂರು ರಾಣಿ ಚೆನ್ನಮ್ಮನ ಮೆರೆತ
ಓಬವ್ವನ ಒನಕೆ ಬಲು ಹೊಡೆತ!
ಪುಟಾಣಿಗಳ ನಡೆತ, ಮಕ್ಕಳ ಕುಣಿತ, ಕೋಲಾಟದ ಕಲೆತ,
ಗಣೇಶಗೆ ಆರತಿ ಎತ್ತುತ, ಮದ್ದಳೆ ತಾಳ ಮೇಳ ಸಂಗೀತ,
ಸುಲಗ್ನಾ ಸಾವಧಾನ ಪುರೋಹಿತ ಮಂತ್ರಹೇಳುತಾ,
ವಧು ವರರು ತಾಳಿ ಕಟ್ಟುತ,
ಬೇಲೂರು ಶಿಲಾಬಾಲಿಕೆಯರು ಹಾಡುತಾ ಸುಂದರ ನೃತ್ಯ ಮಾಡುತಾ!
ಕ್ರಿಕೆಟ್ ಪಟುಗಳು ಬ್ಯಾಟ್ ಚೆಂಡು ಆಡುತ,
ಲುಂಗಿ ಉಟ್ಟು ಗಿಟಾರ್ ಮಿಡಿದು ಹಾಡುತ ರಘು ದೀಕ್ಷಿತ,
ಯಾರು ತಾನೇ ಮರೆಯಲು ಸಾಧ್ಯ --
ಆ ಹಾವಭಾವದ ಶಕುಂತಲಾ ದೇವಿಯ ಗಣಿತ!
ಬಣ್ಣ ಬಣ್ಣದ ಜರಿ ಸೀರೆ ಸೆರಗುಗಳು ಹೊಳೆಯುತಾ,
ರಂಗು ರಂಗಿನ ಲಂಗ ದಾವಣಿ ಪಜಾಮ ಕುರತಾ,
ಗಟ್ಟಿ ಗಂಟಿನ ಕಚ್ಚೆ ಪಂಚೆ ಹಿಡಿತ,
ಹೀಗೆ KSA ಬೆಳ್ಳಿ ಹಬ್ಬಕೆ ಮೆರಗು ತಂದಿತಾ!
ಸಹನಾ ಮಾಡಿಸಿದ ಮೆರವಣಿಗೆ
ನಮ್ಮ ಕನ್ನಡ ಸಂಘದ ಬೆಳ್ಳಿಹಬ್ಬದ ಹಿರಿಮೆಗೆ!
ಶುಭ ಹಾರೈಕೆಗಳೊಂದಿಗೆ,
-ಕ್ರಿಶ್ ಕೃಷ್ಣಮೂರ್ತಿ
*************************
ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಸಂದರ್ಭದಲ್ಲಿ
ಕ್ರಿಶ್ ಕೃಷ್ಣಮೂರ್ತಿ:
ನಮ್ಮ ಮನೆ ವಿಶೇಷ
ಭೀಮನ ಅಮಾವಾಸ್ಯೆ
ಆಗುತ್ತಲೇ ಇರುವುದು
ನಿತ್ಯ ಗಂಡನ ಪೂಜೆ!